June 5, 2016

ಇನ್ನೂ ಹಲವರು..

ಅಯ್ಯೋ....
ಹೊಲದ ಬದಿಯಲ್ಲಿದ್ದ
ಜೇಡದ ಬಲೆ
ತನ್ನಷ್ಷಕ್ಕೆ ತಾ
ಕಟ್ಟಿದೆ ಎಂದೆ
ತುಳಿದಾಗ
ತಿಳಿಯಲಿಲ್ಲ
ಇದು ಅದರ ಆಹಾರದ ಹಕ್ಕೆಂದು.


ಅಯ್ಯೋ...
ಬೆಳಿಯಲ್ಲಿ ಅರಳಿದ
ರೋಜಾ ಹೂ ಕಿತ್ತಾಗ
ನನ್ನ
ಯಾರು ಪ್ರಶ್ನಿಸಲಿಲ್ಲ
ಅರಳುವುದು
ಅದರ ಸ್ವತಂತ್ರ್ಯವೆಂದು.

ಅಯ್ಯೋ....
ಸೀಬೆ ಮರದಲ್ಲಿಂದ
ಚೆಜಾಗದ ಗೂಡಿಗೆ
ಕಲ್ಲು ಹೊಡೆದು
ಹಣ್ಣು ಕಿತ್ತಾಗ
ಯಾರು ಹೇಳಾಲಿಲ್ಲ
ಅದು ಅದರ ಸೂರೆಂದು.

ಅದರೇ ಈಗ
ನಾವು ಮಾತನಾಡುತ್ತಿದ್ದೆವೆ
ಆಹಾರ ನಮ್ಮ ಹಕ್ಕು
ಮಾತನಾಡುವುದು ನಮ್ಮ ಅಭಿವ್ಯಕ್ತ ಸ್ವಾತಂತ್ರ್ಯ
ನಮ್ಮ ಬೇವರ ಹನಿಯ ಭೂಮಿ
ಇನ್ನೂ ಹಲವರು..

- ದ್ಯಾವನೂರು ಮಂಜುನಾಥ್

No comments:

Post a Comment