October 26, 2023

ರಾಜ ಸುರಂಗ ಮಾರ್ಗವನ್ನು ಹೊಂದಿದ ಅಂದಿನ ಪಾಂಚಜನ್ಯಪುರವೇ ಇಂದಿನ ಶಂಖ


ಲೇಖನ: ದ್ಯಾವನೂರು ಮಂಜುನಾಥ್‌, ಹಾಸನ

     ಹಾಸನ ತಾಲ್ಲೂಕು ಕೇಂದ್ರದಿಂದ ಉತ್ತರಕ್ಕೆ 16 ಕಿ.ಮೀ ದೂರದಲ್ಲಿರುವ ಶಂಖ ಗ್ರಾಮ ಹೊಯ್ಸಳರ ಕಾಲದಲ್ಲಿ ಒಂದು ಅಗ್ರಹಾರವಾಗಿದ್ದು ಒಂದು ಗ್ರಾಮಕ್ಕೆ ಹಿಂದೆ ಪಾಂಚಜನ್ಯಪುರ ಎಂಬ ಹೆಸರು ಗ್ರಾಮಕ್ಕೆ ಇದೆ.

ಚಿತ್ರ: ದೇವಾಲಯದ ನಕ್ಷೆ

     ಪಾಂಚಜನ್ಯ ಹಿಂದೂ ದೇವತೆ ವಿಷ್ಣುವಿನ ಶಂಖ. ವಾಲ್ಮೀಕಿ ರಾಮಾಯಣದ ಪ್ರಕಾರ, ಪುರುಷೋತ್ತಮನು ವಿಶ್ವಕರ್ಮನಿಂದ ನಿರ್ಮಿತ ಚಕ್ರವಾನ್ ಪರ್ವತದ ಮೇಲೆ ಪಾಂಚಜನನೆಂಬ ದಾನವನನ್ನು ಕೊಂದು ಅವನಿಂದ ಪಾಂಚಜನ್ಯವೆಂಬ ಶಂಖವನ್ನು ತೆಗೆದುಕೊಂಡನು. ಹರಿವಂಶದ ಪ್ರಕಾರ, ಕೃಷ್ಣನು ಪಾಂಚಜನ್ಯವೆಂಬ ಶಂಖವನ್ನು ಹೊಂದಿದ್ದಾನೆ ಎಂದು ವಿವರಿಸಲಾಗಿದೆ. ಅದ್ದರಿಂದ ಕಾಲಾಂತರದಲ್ಲಿ ಪಾಂಚಜನ್ಯಪುರ ಎಂಬುವುದು ಶಂಖವೆಂದು ಗ್ರಾಮವನ್ನು ಕರೆಯಲ್ಪಟ್ಟೆದೆ.

     ಪಾಂಚಜನ್ಯಪುರ ಎಂದೂ ಖ್ಯಾತವಾದ ಗ್ರಾಮದಲ್ಲಿರುವ ಪುಟ್ಟ ಗುಡ್ಡದ ಮೇಲೆ ನಾಲ್ಕು ಅಂಕಣದ ಪುಟ್ಟ ದೇವಾಲಯವಿದ್ದು. ದೇವಾಲಯ ಮುಖಮಂಟಪ, ಸುಖನಾಸಿಗರ್ಭಗೃಹವಿದ್ದು, ದೇವಾಲಯ ಸುಮಾರು 900 ವರ್ಷಗಳಷ್ಟು ಪಾರಾತನವಾದದ್ದು ಎಂದು ತಿಳಿದುಬರುತ್ತದೆ.



     ಸಾಲುಗಾಮೆ ಗ್ರಾಮದಲ್ಲಿರುವ ಶ್ರೀ ಚನ್ನಕೇಶವ ದೇವಾಲಯದ ಪಕ್ಕದಲ್ಲಿರುವ ಶಾಸನವು ಮಾಲಿತಮ್ಮ ಬರೆಸಿದ್ದು ಹೊಯ್ಸಳ ರಾಜವಂಶದ ವೀರ ಸೊಮೇಶ್ವರನ ಆಳ್ವಿಕೆಯನ್ನು ಉಲ್ಲೇಖಿಸುವ ಶಾಸನದಲ್ಲಿ ಪಾಂಚಜನ್ಯಪುರ ಮಂಗಳ ಮಹಾ ಶ್ರೀ ಚನ್ನಕೇಶವ ಎಂದು ಸಹ ಉಲ್ಲೇಖಿಸಿದೆ.

ಚಿತ್ರ: 16 ಕಾಲು ಮಂಟಪ

ಚಿತ್ರ:ವಿಘ್ನೇಶ್ವರ
ಚಿತ್ರ:ವಿಘ್ನೇಶ್ವರ

ದೇವಾಲಯ ಎರಡು ಹಂತಗಳಲ್ಲಿ ನಿರ್ಮಾಣವಾಗಿದ್ದು ದೇವಾಲಯ ಗ್ರಾಮದ ದಿಬ್ಬದ ಮೇಲೆ ಇದೆ. ದೇವಾಲಯವನ್ನು ಪ್ರವೇಶವನ್ನು ಮಾಡಬೇಕಾದರೆ ನಮಗೆ ಮೊದಲಿಗೆ 16 ಕಾಲು ಮಂಟಪವನ್ನು ನೋಡ ಬಹುದಾಗಿದೆ. ಮಂಟಪದಲ್ಲಿ 16 ಕಂಬಗಳು ಇದ್ದು ಕೆಲವೊಂದು ಬಲಪದ ಕಲ್ಲಿನಿಂದ ಕೂಡೆದೆ ಕೆಳವೊಂದಕ್ಕೆ ಬಳಪದ ಕಲ್ಲಿನ ಪಕ್ಕದಲ್ಲೇ ಒರಟು ಕಲ್ಲಿನಿಂದ ನಿರ್ಮಾಣಗೊಂಡಿದೆ. ಮೂರನೆ ಸಾಲಿನಲ್ಲಿರುವ ಒಂದು ಬಲಪದ ಕಲ್ಲಿನ ಕಂಬದ ಮೇಲೆ ವಿಘ್ನೇಶ್ವರ ಕೆತ್ತನೆಯನ್ನು ನಾವು ನೋಡಬಹುದಾಗಿದೆ.

ಚಿತ್ರ: ಗರುಡ ಕಂಬ ಹಾಗೂ ದೇವರ ಪದ

ಮಂಟಪವನ್ನು ಬಿಟ್ಟು ಮುಂದೆ ಸಾಗಿದರೆ ನಮಗೆ ಇತ್ತಿಚಿಗೆ ನಿರ್ಮಾನಗೊಂಡ ಗರುಡ ಕಂಬ ಹಾಗೂ ದೇವರ ಪದಗಳನ್ನು ನಾವು ನೋಡಬಹುದಾಗಿದೆ. ದೇವಾಲಯದ ಗರುಡ ಕಂಬ ಬಲಕ್ಕೆ ಮತ್ತೊಂದು ನಾವು ವಿಶೇಷವಾಗಿ ಒಂದು ಸುರಂಗ ಮಾರ್ಗವನ್ನು ಗಮನಿಸಬಹುದು. ಇದು ದೇವಾಲಯದ ಈಶಾನ್ಯ ಭಾಗದಲ್ಲಿ ಇದ್ದು ಒಂದು ರಾಜ ಸುರಂಗ ಶಂಖ ಗ್ರಾಮದಿಂದ ಬೇಲೂರು ದೇವಾಲಯಕ್ಕೆ ಸುಮಾರು 38 ಕಿ.ಮಿ
                  ಚಿತ್ರ: ಸುರಂಗ 

ಇದೆ
ಎಂದು ಸಂಶೋದಕರು ತಿಳಿಸುತ್ತಾರೆ. ಇತ್ತಿಚಿಗೆ ಸುರಂಗ ಮಾರ್ಗವನ್ನು ಪುರತತ್ವ ಇಲಾಖೆಯವರು ಪ್ರವೇಶ ಮಾಡಿದ ಸಮಯದಲ್ಲಿ ಸುರಂಗದಲ್ಲಿ ದೇವರ ವಿಗ್ರಹಗಳು ಹಾಗೂ ಕೇಲವು ಪೂಜಾ ಸಮಾಗ್ರಿ ಇತ್ಯಾದಿ ವಸ್ತುಗಳು ದೊರಕಿವೆ ಎಂದು ಗ್ರಾಮಸ್ಥರು ತಿಳಿಸುತ್ತಾರೆ. ಸುರಂಗ ಮಾರ್ಗದಲ್ಲಿ ಸುಮಾರು 2 ರಿಂದು 2.5 ಕಿಮಿ ಪುರತತ್ವ ಇಲಾಖೆಯ ಸಂಶೋದನ ತಂಡ ಹೋಗಿ ಗಾಳಿಯ ಕೊರತೆಯಿಂದ ಪುನಃ ಹಿಂದೆ ಬಂದರು ಎಂದು ಗ್ರಾಮಸ್ಥರು ತಿಳಿಸುತ್ತಾರೆ.
ಚಿತ್ರ :ಕಂಬಗಳ ಹೊರಗಣ

ಇನ್ನೂ ದೇವಾಲಯದ ಹತ್ತಿರ ಬಂದರೆ ದೇವಾಲಯದ

ಚಿತ್ರ :ನವರಂಗ
ನವರಂಗವನ್ನು ಪ್ರವೇಶ ಮಾಡುವ ಮೊದಲಿಗೆ ನಮಗೆ 8 ಕಂಬಗಳ ಹೊರಗಣ ನೋಡಬಹುದು. ನಂತರ ಮುಂದೆ ನಡೆದರೆ 16 ಕಂಬಗಳಿಂದ ನಿರ್ಮಾಣ ಮಾಡಿರುವ ವಿಶಾಲವಾದ ನವರಂಗವನ್ನು ಪ್ರವೇಶ ಮಾಡುತ್ತೇವೆ. ದೇವಾಲಯದ ನವರಂಗದಲ್ಲಿ ಆಳ್ವರ ಇತ್ತಿನ ವಿಗ್ರಹವನ್ನು ನೋಡಬಹುದಾಗಿದೆ.

ಚಿತ್ರ : ಬಳಪದ ಕಲ್ಲು

ನವರಂಗದಿಂದ ಶುಕನಸಿಯನ್ನು ಪ್ರವೇಶ ಮಾಡಬೇಕಾದರೆ ನಮಗೆ ಶುಕನಸಿಯಿಂದ ಗರ್ಭಗುಡಿ ವರೆಗೆ ಬಳಗೆ ಮಾಡಿರುವ ಬಳಪದ ಕಲ್ಲುನ್ನು ನಾವು ಗಮನಿಸಬಹುದು ಶುಕನಸಿಯ ದ್ವಾರ ಮೇಲೆ ಒಂದು ಶಾಸನವನ್ನು ಸಹ ಗಮನಿಸಬಹುದಾಗಿದೆ.




ಚಿತ್ರ : ಶುಕನಸಿಯ ದ್ವಾರ  ಶಾಸನ

ದೇವಾಲಯದ ಶುಕನಸಿಯನ್ನು ನೋಡಿದರೆ ಇಲ್ಲಿ ಯಾವುದೇ ಕೆತ್ತನೆಗಲನ್ನು ಕಾಣ ಸಿಗುವುದಿಲ್ಲ.

ಚಿತ್ರ : ಶುಕನಸಿ

ಶುಕನಸಿಯ ನಂತರ ಇರುವ ಮೂಲ ಗರ್ಭಗುಡಿಯನ್ನು ನಾವು ಚನ್ನಕೇಶ್ವವ ಸ್ವಾಮಿಯ ಮೂರ್ತಿಯನ್ನು ನೋಡಬಹುದು. ಶ್ರೀ ಚನ್ನಕೇಶ್ವ ಸ್ವಾಮಿಯ ಪೀಠದ ಮೇಲೆ ಗರುಡ ವಿಗ್ರಹವನ್ನು ಸಹ ಇದ್ದು ಸ್ವಾಮಿಯು 6 ಅಡಿ ಎತ್ತರದ ಹೊಯ್ಸಳ ಶೈಲಿಯ ಶ್ರೀ ಚನ್ನಕೇಶವಸ್ವಾಮಿಯ ಸುಂದರ ವಿಗ್ರಹವಿದೆ. ಕೇಶವ ತನ್ನ ಎರಡು ಕೈಗಳಲ್ಲಿ ಶಂಖ, ಚಕ್ರಗಳನ್ನೂ ಮುಂದಿನ ಎರಡು ಕೈಗಳಲ್ಲಿ ಗದೆ ಹಾಗೂ ಪದ್ಮವನ್ನೂ ಹಿಡಿದಿದ್ದಾನೆ. ಇದರ ಹಿಂದಿರುವ ಪ್ರಭಾವಳಿಯಲ್ಲಿ ಸುಂದರ, ಮೋಹಕ ಕೆತ್ತನೆಗಳಿವೆ.

ಭಕ್ತರ ಬಯಕೆಗಳನ್ನು ಸದಾ ಈಡೇರಿಸುವ ಕೇಶವನ ಮಹಿಮೆಯ ಬಗ್ಗೆ ಹಲವಾರು ಕಥೆಗಳಿವೆ. ಬಹು ಶಿಥಿಲವಾಗಿದ್ದ ದೇವಾಲಯ ಜೀರ್ಣೋದ್ಧಾರಕ್ಕಾಗಿ ಗ್ರಾಮಸ್ಥರು ಶ್ರೀ ಚನ್ನಕೇಶವ ವೈಷ್ಣವ ಸೇವಾ ಸಮಿತಿ ರಚಿಸಿ, ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗಡೆ ಅವರ ಮಾರ್ಗದರ್ಶನದಲ್ಲಿ ಹಾಗೂ ಧರ್ಮೋತ್ಥಾನ ಟ್ರಸ್ಟ್ ನೆರವಿನಿಂದ ದೇವಾಲಯಕ್ಕೆ ಕಾಯಕಲ್ಪ ನೀಡಿದ್ದಾರೆ.

ದೇವಾಲಯಕ್ಕೆ ಹೊಯ್ಸಳರ ದೊರೆಗಳು ಅಪಾರವಾದ ನಗ, ನಾಣ್ಯ, ಪಂಚಲೋಹದ ವಿಗ್ರಹಗಳನ್ನು ನೀಡಿದ್ದಾರೆ. ಇಲ್ಲಿರುವ ತಟ್ಟೆ, ತಂಬಿಕೆ, ಹರಿವಾಣಗಳು ಪ್ರಾಚೀನತೆಯ ಸಂಕೇತವಾಗಿವೆ.