February 16, 2019

ಸೈನಿಕ

ಕೊರೆಯುವ ಹಿಮದಲ್ಲಿ
ಎದೆಯ ಗುಂಡಿಗೆಗೆ
ಚಿಮ್ಮಿದ ಬಿಸಿ ರಕ್ತ
ಇದೋ ನೋಡು ತಾಯಿ
ನಿನಗೆ ನಾ ಇಟ್ಟ ಅಭಿಷೇಕ
ಮತ್ತೆ ಮತ್ತೆ ಹುಟ್ಟಿ
ರತ್ನ ಕಂಬಳಿ ಹೊದಿಸಿ
ದೇಶ ಕಾಯುವೆ.
ಸಜ್ಜನೆಯಾಗಿ ಮಜ್ಜನಕ್ಕೆರೆದು
ಶಾಂತಿಗಾಗಿ ಪ್ರಾಣ ನೀಡುವೆ
ಅದೆಷ್ಟೇ ಸಾರಿ.,

ಬರಲಿ ಆ ಉಗ್ರ ಪಾಪಿಗಳು
ಉಗ್ರನರಸಿಂಹನಾಗಿ
ನಾ ಬರುವೆ
ಕೊರೆಯುವ ಹಿಮದ
ಒಡಲಿನಲ್ಲಿ.
© ದ್ಯಾವನೂರು ಮಂಜುನಾಥ್

No comments:

Post a Comment